![]() |
ಮೌನೇಶ್ವರರ ವಚನಗಳು - 776 |
" ಷಡುದರುಶನದಾಟ ಕಡಿಯಾಗಿ ಹೋದ ಮೇಲೆ
ಜಡೆಮುಡಿಗಳು ಯಾತಕ್ಕೆ,
ಬಿರುದಿಗೆ ಮರ್ತ್ಯದೊಳು ಬೆಡಗು ಬಂದೈತೆ, ಬಸವಣ್ಣ "
ವಚನಾರ್ಥ :-
ಆರು ದರುಶನಗಳ ಆಟ ಅಥವಾ ಬೋಧೆ ಮುಗಿದು ಹೋದ ಮೇಲೆ ಜಡೆ ಮುಡಿಗಳು ಯಾತಕ್ಕೆ, ವೈದಿಕ ದರ್ಶನಗಳು ಹಾಗೂ ಅದರ ಜ್ಞಾನವಳಿದು ಹೋದರೂ ಅದರ ಗುರುತಾಗಿ ಜಡೆ ಮುಡಿಗಳಿರುವುದು ಅದು ವೇಷ ಡಂಬಕರ ಲಕ್ಷಣ. ಮರ್ತ್ಯಕ್ಕೆ ಭಿನ್ನಕಾಲ ಬಂದಿರುವಾಗ ಷಡ್ದರುಶನಗಳಾಟ ನಡೆಯಲಾಗದು. ಆ ಮೂಲಕ ವೈದಿಕ ದರ್ಶನಗಳ ಅಪ್ರಸ್ತುತತೆಯನ್ನು ಅನುಭಾವದ ಮಹತ್ವವನ್ನು ವಚನ ಹೇಳುತ್ತದೆ.
0 Comments