ಮೌನೇಶ್ವರ ವಚನ ಮಾಲಿಕೆ - 43

ಮೌನೇಶ್ವರರ ವಚನಗಳು - 43

" ಭೂತಳ ಜಲದಿಗೆ ಓತು ಸಿಂಪಿಲಿ ಮುಗಿದು
ಭೂತಳವೆಲ್ಲ ಉರಿದೆದ್ದು ಹಂಪಿಯ ಗೋಪುರ
ಅಳಿವ ದಿನ ಬಂದಾವು, ಬಸವಣ್ಣ "

ವಚನಾರ್ಥ:-
ಮೌನೇಶ್ವರರು ಬರೀ ವಚನಕಾರರಲ್ಲದೇ ಕಾಲಜ್ಞಾನಿಗಳೂ ಆಗಿದ್ದರೆಂಬುದು ಅವಿಸ್ಮರಣೀಯ. ಈ ವಚನದಲ್ಲಿ ಅಂತಹ ಕಾಲ ಜ್ಞಾನದ ಕುರಿತಾಗಿ ತಿಳಿಸಿದಂತಿದೆ. ಪ್ರಳಯದ ವಿವಿಧ ಸಾಧ್ಯತೆಗಳನ್ನು ಈ ಕಾಲಜ್ಞಾನ ವಚನ ಹೇಳುವಂತಿದೆ. ಭೂಮಿಯು ಸಾಗರದಲ್ಲಿ ಸಿಂಪಿಯಂತೆ ಮುಳುಗುತ್ತದೆ. ಭೂತಳವೆಲ್ಲ ಉರಿಯುತ್ತದೆ ಎಂಬುದು ಅಗ್ನಿಪ್ರಳಯದ ರೀತಿ. ಇಂತಹ ಮಹಾ ಪ್ರಳಯದಲ್ಲಿ ಹಂಪಿ ಗೋಪುರ ಅಳಿಯುತ್ತದೆ ಎಂದು ಸೂಚಿಸಲಾಗಿದೆ. 

Post a Comment

0 Comments