![]() |
| ಮೌನೇಶ್ವರರ ವಚನಗಳು - 517 |
" ಮಾದಿಗರು ಮಾಡಿದ ಮಾಣಿಕದ ಮಡಿಕೆಯೊಳಗೆ
ಜಾಣ ಜಾಣರು ಉಣಬೇಕು,
ಇದಕ್ಕೆ ವಾಣಿಗಳೇತಕೆ ಇದಕೆ ಒಪ್ಪ ಬಣ್ಣ ಎರಡುಂಟೆ,
ಲೋಕದ ಮಾಣಿಯ ಮಕ್ಕಳು ಅರಿಯಿರೊ, ಬಸವಣ್ಣ "
ವಚನಾರ್ಥ :-
ಕುಲಭೇದ ಮೀರಿದವಗೆ ಕುಲಛಲದ ಮದವಿರದು. ಅಂತಹ ಸಾಧಕನು ಕುಲಭೇದವೆನ್ನದೆ ಕರೆದಲ್ಲಿ ಉಣ್ಣುವನು. ಇದಕ್ಕೆ ಯಾರ ಒತ್ತಾಯವು ಇರದು. ಎಲ್ಲವೂ ಒಂದೆ ಎಂದು ತಿಳಿದ ಸಾಧಕನಿಗೆ ಲೋಕ ಎರಡಲ್ಲ ಎಂಬುದನ್ನು ಅರಿಯಿರೋ ಎಂದು ಮೌನೇಶ್ವರರು ಹೇಳುತ್ತಾರೆ.
ಕುಲಭೇದ ಮೀರಿದವಗೆ ಕುಲಛಲದ ಮದವಿರದು. ಅಂತಹ ಸಾಧಕನು ಕುಲಭೇದವೆನ್ನದೆ ಕರೆದಲ್ಲಿ ಉಣ್ಣುವನು. ಇದಕ್ಕೆ ಯಾರ ಒತ್ತಾಯವು ಇರದು. ಎಲ್ಲವೂ ಒಂದೆ ಎಂದು ತಿಳಿದ ಸಾಧಕನಿಗೆ ಲೋಕ ಎರಡಲ್ಲ ಎಂಬುದನ್ನು ಅರಿಯಿರೋ ಎಂದು ಮೌನೇಶ್ವರರು ಹೇಳುತ್ತಾರೆ.


0 Comments