ಶ್ರೀ ಮೌನೇಶ್ವರ ವಚನ ಮಾಲಿಕೆ - 684

ಮೌನೇಶ್ವರರ ವಚನಗಳು - 684


" ಹಿಂದೂ ತುರುಕರು ಒಂದಾಗಿ ನಡದಾರು 
ದೀನ್‌ದಾರ ಬಸವಣ್ಣ ಬರುವಾಗ, 
ಲೋಕದ ಅಂಧಕರಿಗೇನು ತಿಳಿಯದು, ಬಸವಣ್ಣ "

ವಚನಾರ್ಥ :-
ಮಹಾತ್ಮನಾದ ಚೆನ್ನಬಸವಣ್ಣ ದೀನ್‌ದಾರ ರೂಪದಲ್ಲಿ ಅವತರಿಸಿ ಬರುತ್ತಾನೆ. ಆಗ ಹಿಂದೂಗಳೂ ಮುಸಲ್ಮಾನರೂ ಅನ್ಯೋನ್ಯವಾಗಿ ಬಾಳುತ್ತಾರೆ. ಇದರ ಮರ್ಮ ಸಾಮಾನ್ಯ ಜನರಿಗೆ ತಿಳಿಯುವುದಿಲ್ಲ. ಇದು ಮುಂದೆ ನಡೆಯುವ ಭವಿಷ್ಯದ ಮಾತಾದರೂ ಇದರ ಕಾರಣಕರ್ತೃ ಮೌನೇಶ್ವರರೇ ಆಗಿದ್ದಾರೆ. ಅಂತವರ ಪ್ರಯತ್ನದಿಂದಾಗಿಯೇ ಇತ್ತೀಚಿನವರೆಗೂ ಹಿಂದೂ ಮುಸ್ಲಿಂ ಸಾಮರಸ್ಯದ ಜೀವನ ನಡೆಯುತ್ತಲೇ ಬಂದಿದೆ. ದೀನ್‌ದಾರ್ ಚೆನ್ನಬಸವಣ್ಣ ಎಂದು ಹೇಳಿರುವುದನ್ನು ಮೌನೇಶ್ವರರ ಗುಡಿಗಳಲ್ಲಿ 'ಮೌನದೀನ್' ಎಂದು ಘೋಷಿಸುವ ಮಂತ್ರದೊಡನೆ ಹೋಲಿಸಿಕೊಳ್ಳಬೇಕು. ಒಂದು ಕಾಲದಲ್ಲಿ ಉತ್ತರ ಕರ್ನಾಟಕದಲ್ಲಿ ದೀನ್‌ದಾರ್ ಚೆನ್ನಬಸವಣ್ಣನ ಪಂಥ ಜೀವಂತವಾಗಿದ್ದದ್ದು ಗಮನಾರ್ಹ.

Post a Comment

0 Comments