![]() |
ಮೌನೇಶ್ವರರ ವಚನಗಳು - 543 |
" ಕುಲುಮಿ ಇಲ್ಲದಿದ್ದರೆ ಕುಲವಿಲ್ಲ ಗೋತ್ರವಿಲ್ಲ
ಹಲವು ಪರಿಯ ಆಯುಧಗಳಿಲ್ಲ ಲೋಕದ
ಕಿಲಮಿ ಕೀಟಕದ ಹುಳಗಳಿರಾ, ಬಸವಣ್ಣ "
ವಚನಾರ್ಥ :-
ಕುಲುಮಿ ಎನ್ನುವುದು ನಾಗರಿಕತೆಗೆ ಮುನ್ನುಡಿ ಬರೆದ ಸಾಂಸ್ಕೃತಿಕ ಪರಿಕಲ್ಪನೆ. ಕಬ್ಬಿಣದ ಆವಿಷ್ಕಾರ. ಮನುಷ್ಯನನ್ನು ಅಧೀಮತ್ವದಿಂದ ಬೇರ್ಪಡಿಸಿತು. ಅಂತಹ ಕುಲುಮಿ ಹುಟ್ಟದಿದ್ದರೆ ನಾಗರಿಕತೆ ಬೆಳೆಯುತ್ತಿರಲಿಲ್ಲ. ಹಲವು ಕುಲ ಗೋತ್ರಗಳು ಹಲವು ಬಗೆಯ ಆಯುಧಗಳು ಆವಿಷ್ಕಾರವಾಗುತ್ತಿರಲಿಲ್ಲ. ಕುಲುಮಿ ಆಯುಧಗಳ ಆವಿಷ್ಕಾರದೊಂದಿಗೆ ಹಲವು ಉದ್ಯೋಗಗಳನ್ನು ಸೃಷ್ಟಿಸಿತು. ಅಂತಹ ನಾಗರಿಕತೆಯ ಸ್ಪರ್ಶ ನೀಡಿದ ಕುಲ ಪಾಂಚಾಳರದು ಎನ್ನುವುದು ವಚನದ ಭಾವ.
0 Comments