ಶ್ರೀ ಮೌನೇಶ್ವರ ವಚನ ಮಾಲಿಕೆ - 702

ಮೌನೇಶ್ವರರ ವಚನಗಳು - 702

" ಕುಲ ಛಲಗಳ ಬಿಡಿರಿ, ಕುಲುಮಿಗೆ ಚಪಟಿ ಬಂದೀತು ಪರಬ್ರಹ್ಮನಾಣೆ ಪುಸಿಯಿಲ್ಲ, ಪಂಚಾನನ ಕುಲ 
ಉದ್ಧಾರ ಮಾಡುವ ಗುರು ಬಂದ, ಬಸವಣ್ಣ "

ವಚನಾರ್ಥ :-
ಕನ್ನಡ ಸಾಹಿತ್ಯದಲ್ಲಿ ವಿಶ್ವಕರ್ಮರ ಕುಲದ(ಪಂಚಾಳ/ಪಂಚಾನನ/ ಪಾಂಚಾಲ ಕುಲ) ಹಿರಿಮೆಯನ್ನು ಎತ್ತಿ ಹಿಡಿಯುವ ಮೌನೇಶ್ವರರಂತಹ ಇನ್ನೊಬ್ಬ ಮಹಾನ್ ದೈವಗುರು ಸಿಗುವುದಿಲ್ಲ. ಈ ವಚನದಲ್ಲಿನ 'ಪಂಚಾನನ ಕುಲ ಉದ್ಧಾರ ಮಾಡುವ ಗುರು ಬಂದ' ಎಂಬ ಮಾತು ಅವರಿಗೇ ಅನ್ವಯವಾಗುತ್ತದೆ. ಕುಲುಮೆ ಶ್ರೇಷ್ಠ, ಅದನ್ನು ಅವಲಂಬಿಸಿ ಉಳಿದೆಲ್ಲ ಕುಲಗಳು ತಮ್ಮತಮ್ಮ ಕಸುಬುಗಳನ್ನು ಮಾಡುತ್ತ ಹೋಗಬೇಕು. ಇದರಲ್ಲಿ ಎಲ್ಲರ ಕಾಯಕಗಳೂ ಸಮಾನ, ಯಾರೂ ಶ್ರೇಷ್ಠರಲ್ಲ ಕನಿಷ್ಠರಲ್ಲ(ಕುಲ-ಛಲಗಳನ್ನು ಬಿಡಿರಿ). ಕುಲುಮೆಯ ಆಧಾರದಿಂದ ಕಮ್ಮಾರ, ಬಡಿಗ, ಕಂಚುಗಾರ, ಅಕ್ಕಸಾಲಿ, ಶಿಲ್ಪಿ (ವಿಶ್ವಕರ್ಮರ ಐದು ಪಂಚ ಕುಲ ಕಸುಬುಗಳು) ಈ ಪಂಚಾನನರ ವೃತ್ತಿಗಳು ನಡೆಯುತ್ತವೆ. ಅವರಿಗೆ ಸಿಗಬೇಕಾದ ಯೋಗ್ಯಸ್ಥಾನ ಇನ್ನು ಮುಂದೆ ಪರಬ್ರಹ್ಮನಾಣೆಗೂ ಸಿಗುತ್ತದೆ ಎನ್ನುವುದು ವಚನದ ಸಾರವಾಗಿದೆ.

Post a Comment

0 Comments