ಶ್ರೀ ಮೌನೇಶ್ವರ ವಚನ ಮಾಲಿಕೆ - 728

 

ಮೌನೇಶ್ವರರ ವಚನಗಳು - 728

" ಕಾಡಿಬೇಡಿ ಉಂಬುವ ನರರು ನಾಡನಾಳುವರು 
ಪೀಡೆಗಳೆಂದ ಪ್ರಭುರಾಯ ಎನ್ನ ಕೂಡ 
ಮಾಡಿ ಉಣಬೇಕು ಸರಿಯಾಗಿ ಎಂದಿನ್ನು 
ಜೋಡೆತ್ತ ಬೆದಕವರ ಹೊರಹೂಟೇನು, ಬಸವಣ್ಣ "

ವಚನಾರ್ಥ :-
ಕಾಡಿ ಬೇಡಿ ತಿಂದ ನರರು ಪ್ರಜೆಗಳನ್ನು ಕಾಡಿಸಿ ಪೀಡಿಸಿ ಆಳುವ ನಾಯಕರಾಗಿ ಬರುತ್ತಾರೆ. ಈ ಲಾಭದಾಸೆಗೆ ಅಧಿಕಾರ ಹಿಡಿಯುವ ಇಂತಹ ನಾಯಕರು ಜನರನ್ನು ಪೀಡಿಸುವ ಪೀಡಕರು. ಅಂತಹವರ ಅಧರ್ಮ ಅನೀತಿಯನ್ನು ಅಡಗಿಸಿ ಜನರನ್ನು ವಿಮೋಚನೆ ಮಾಡಲು, ಅವರಿಗೆ ಧ್ವನಿ ನೀಡಲು ಬಂದವರು ಮೌನೇಶ್ವರರು. ನಾಡನಾಳಲು ಅರ್ಹತೆ ಪಡೆಯಬೇಕಾದರೆ ಉಳುಮೆ ಮಾಡಲು ಕಲಿಯಬೇಕು. ಅಂತಹವನು ಪ್ರಜಾಪಾಲಕ ಪ್ರಭುವಾಗುತ್ತಾನೆ. ಇಲ್ಲದಿದ್ದರೆ ಪೀಡಕನಾಗುತ್ತಾನೆ.

Post a Comment

0 Comments