![]() |
ಮೌನೇಶ್ವರರ ವಚನಗಳು - 757 |
" ಬಾಜಾರ ಬಂದೀತು ಓಜು ಉಂಡ್ಯಾದೀತು
ಸೂಜಿ ಒಂದು ಹೊನ್ನಿಗೆ ಮಾರೀತು
ಲೋಕದ ಸೋಜಿಗವ ನೋಡು, ಬಸವಣ್ಣ "
ವಚನಾರ್ಥ :-
ಬಾಜಾರ ಅಂದರೆ ನಗರೀಕರಣ ಮತ್ತು ಜಾಗತೀಕರಣದ ಮುಕ್ತ ಮಾರುಕಟ್ಟೆಯ ಸಮಸ್ಯೆಗಳನ್ನು ವಚನ ಸೂಚಿಸುತ್ತಿದೆಯೆ? ಬಾಜಾರ ಇದ್ದಲ್ಲಿ ಇರುವುದು, ಸಂತೆ ನಡೆಯುವುದು ಭಾರತದಲ್ಲಿ ಹೊಸದೇನಲ್ಲ. ಮೌನೇಶ್ವರರು ಪಾಶ್ಚಾತ್ಯ ರಾಷ್ಟ್ರಗಳಿಂದ ಮುಕ್ತ ಮಾರುಕಟ್ಟೆಯ ರೂಪದಲ್ಲಿ ಬಂದು ಬೀಳುವ ವಸ್ತು ಸಾಮಗ್ರಿಗಳಿಂದ ದೇಸಿ ಉದ್ಯಮಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ವಿವರಿಸುವಂತಿದೆ. ಸರಕು ಸಂಸ್ಕೃತಿಯಿಂದಾಗಿ ಮನುಷ್ಯ ಹಣದ ಬೆನ್ನು ಹತ್ತಿ ತನ್ನ ಸ್ವಂತ ನೆಲೆ ಮತ್ತು ಸ್ವಾವಲಂಬಿತನವನ್ನೇ ಕಳೆದುಕೊಳ್ಳುತ್ತಿದ್ದಾನೆ. ಸ್ಥಳೀಯ ಕುಶಲ ಕರ್ಮಿಯೂ ಜಗತ್ತಿನ ಎಲ್ಲ ಕ್ರಿಯೆಗಳಿಗೆ ಮೂಲಸ್ವರೂಪನೂ ಆದ ಓಜ ಅಂದರೆ ವಿಶ್ವಕರ್ಮ ಶಿಲ್ಪಿಯು, ಕೆಲಸಬಿಟ್ಟು ಉಂಡಾಡಿ ಗುಂಡನಂತೆ ತಿರುಗುವಂತಾಗಿದೆ. ಕದರು, ಸೂಜಿಗಳು ಕಂಬಾರರ ಅಂದರೆ ಸ್ಥಳೀಯ ಗುಡಿ ಕೈಗಾರಿಕೆಗಳ ಉತ್ಪಾದನೆಗಳು. ಜಾಗತೀಕರಣ ಹೊತ್ತಿನಲ್ಲಿ ಒಂದು ಸೂಜಿ ಒಂದು ಹೊನ್ನಿಗೆ ಮಾರುವ ಬೆಲೆಯನ್ನು ಪಡೆಯುತ್ತದೆ. ಇದು ಲೋಕದ ಸೋಜಿಗವೆಂದು ಮೌನೇಶ್ವರರು ಹೇಳುತ್ತಾರೆ. ಅಂದರೆ ಸ್ಥಳೀಯ ಸ್ವಾವಲಂಬಿ ಸಂಸ್ಕೃತಿ ನಾಶವಾಗಿ ಪರಾವಲಂಬಿ ಬದುಕು ಮನುಷ್ಯನದಾಗುತ್ತದೆಂಬ ಸೂಚನೆ ಇಲ್ಲಿರುವಂತಿದೆ.
0 Comments