ಶ್ರೀ ಮೌನೇಶ್ವರ ವಚನ ಮಾಲಿಕೆ - 774

ಮೌನೇಶ್ವರರ ವಚನಗಳು - 774

" ಶೀಲವು ತಪ್ಪಿದರೆ ಶೂಲವು ತಪ್ಪುವುದೆ ಓಲೆ ಬಂದೈತೆ ಜಗಕೆಲ್ಲ ಲೋಕದಲಿ ಕಾಲನ ದಾಳಿ ಕಡಗನವು ಯೆಂದಿನ್ನು
ಕೂಡಲಸಂಗಯ್ಯನು ಸಾರಿದನು, ಬಸವಣ್ಣ "

ವಚನಾರ್ಥ :-
ಕಾಲನ ದಾಳಿಗೆ ಎಲ್ಲರೂ ಒಳಗಾಗುವವರೆ. ಯಾರೂ ಅಮರರಲ್ಲ ಎನ್ನುವ ಸೂಚನೆ ವಚನದಲ್ಲಿದೆ. ಶೀಲವುಳಿಸಿಕೊಳ್ಳಬಹುದು, ಆದರೆ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದೊಂದು ರೀತಿ ಲಿಖಿತವಾದ ಪ್ರಮಾಣಪತ್ರ, ಹುಟ್ಟಿದವರು ಸಾಯಲೇಬೇಕು. ಕಾಲನ ದಾಳಿಯಿಂದ ಕಡೆಹಾಯುವವರು, ಅಂದರೆ ಪಾರಾಗುವವರು ಯಾರೂ ಇಲ್ಲ ಎನ್ನುವ ಜೀವನ ತತ್ವವನ್ನು ವಚನ ಹೇಳುತ್ತದೆ. ಆ ಮೂಲಕ ವೈದಿಕ ಮೂಲದ ಅಮರತ್ವದ ಕಲ್ಪನೆಯನ್ನು ನಿರಾಕರಿಸುತ್ತದೆ ವಚನ.

Post a Comment

0 Comments