![]() |
ಮೌನೇಶ್ವರರ ವಚನಗಳು - 778 |
" ಸಂಕೋಲಿಯ ಬೀಳಲು ಶಂಕರನ ಕೃಪೆಯಾಯ್ತು
ಲಂಕೆಯ ಪಟ್ಟಣ ನಮಗಾಯ್ತು,
ಎಳ್ಳಷ್ಟು ಸಂಕೋಚವಿಲ್ಲ, ಬಸವಣ್ಣ "
ವಚನಾರ್ಥ :-
ಇದೊಂದು ಪೌರಾಣಿಕ ಸಂಗತಿಯನ್ನು ಹೇಳುವ ವಚನವಾಗಿದೆ. ಜೀವಣ್ಣ ಮಸಳಿಯವರು ಅರ್ಥೈಸುವಂತೆ “ಲಂಕೆಯ ಪಟ್ಟ ನಮಗಾಯಿತು” ಎಂಬುದಕ್ಕೆ ಸ್ವಾರಸ್ಯಕರವಾದ ಹಿನ್ನೆಲೆಯಿದೆ. ವಿಷ್ಣು ಲಂಕೆಯ ಮೇಲೆ ಪದೆ ಪದೆ ದಾಳಿ ಮಾಡಿದನು. ಆಗ ಲಂಕೆಯಲ್ಲಿ ಮಾಲಿ, ಸುಮಾಲಿ ಮಾಲ್ಯವಂತರೆಂಬ ಮೂವರು ವೈಶ್ವಕರ್ಮಣ ರಾಜಬಂಧುಗಳು ರಾಜರಾಗಿದ್ದರು. ವಿಷ್ಣುವಿನ ಕಾಟದಿಂದಾಗಿ ಇವರು ರಾಜಭ್ರಷ್ಟರಾಗಿ ದಕ್ಷಿಣ ಪೂರ್ವ ಕರಾವಳಿಯ ಪ್ರದೇಶದಲ್ಲಿ ನೆಲೆಸಿದ್ದರು. ಅರಾಜಕವಾದ ಲಂಕೆಗೆ ಸುಮಾಲಿಯ ಮಗಳಾದ ಕೈಕಸಿಯು ತನ್ನ ಮಗ ರಾವಣನನ್ನು ರಾಜನನ್ನಾಗಿ ಮಾಡಿದಳು. ವಿಶ್ವವಸು ಕೈಕಸಿ ದಂಪತಿ ರಾಜ-ರಾಣಿಯರು ದೇವಿಕಾ ನದಿಯ ದಡದಲ್ಲಿ ವೀರನಗರ ಎಂಬ ರಾಜಧಾನಿಯಲ್ಲಿದ್ದರು. ಅರಾಜಕವಾದ ರಾಜ್ಯಕ್ಕೆ ವಿಶ್ವಕರ್ಮಜನಾದ ರಾವಣನೇ ಅರಸನಾದ ಬಗೆಯನ್ನು ವಚನ ವಿವರಿಸುತ್ತದೆ.
0 Comments