ಶ್ರೀ ಮೌನೇಶ್ವರ ವಚನ ಮಾಲಿಕೆ - 779

ಮೌನೇಶ್ವರರ ವಚನಗಳು - 779

 " ಸಾರಿ ಕೊಲ್ಲಲಿ ಬಂದ ಸಾರಭೂಪತಿಗಳನು ಬಾಗಿ ಹಿಡಿದವರಿಗೆ ಉಳಿವುಂಟು ಸಕಲದೈವದ ಪದವುಂಟು ಸಕಲ 
ಸುಖ ಭೋಗವುಂಟು ದೇವೇಂದ್ರನ ಪದವಿ ನಿಮಗುಂಟು 
ಹಿಡಿದು ಬಿಟ್ಟವರಿಗೆ ಉಡುಗು ಮುತ್ತಿಗೆವುಂಟು 
ಬಿಡದೆ ಹಿಡಿದವರ ಮುಡಿಗೆ ಮುತ್ತಿನ ಸರವುಂಟು, ಬಸವಣ್ಣ "

ವಚನಾರ್ಥ :-
ಅನ್ಯಾಯ ಅನೀತಿ ಅಧರ್ಮ ಅಜ್ಞಾನ ಪರವಶರಾದ ಸಾರಭೂಪತಿಗಳನ್ನು ಕೊಲ್ಲಲು ಹೇಳಿ ಕೇಳಿ ಬಂದವನು. ಅಂತಹ ಅಂಧಕರು ದುರ್ಮಾರ್ಗವನ್ನು ಹಿಡಿಯದೇ ತಿದ್ದಿಕೊಂಡು ನಡೆದರೆ ಅಂತವರಿಗೆ ಉಳಿಗಾಲವುಂಟು. ಸಕಲ ದೈವಗಳ ಸಕಲ ಸುಖ ಭೋಗಗಳ ಫಲವುಂಟು, ದೇವೇಂದ್ರನ ಪದವಿಯೇ ಅಂತಹ ಸಾಧಕರಿಗೆ ದೊರೆಯುತ್ತದೆ. ಅದು ಬಿಟ್ಟು ಅಹಂಕಾರದಿಂದ ಮೆರೆದರೆ ಅಂತವರು ನಾಶವಾಗುತ್ತಾರೆ, ಮುಳುಗಿ ಹೋಗುತ್ತಾರೆ.

Post a Comment

0 Comments