ಶ್ರೀ ಮೌನೇಶ್ವರ ವಚನ ಮಾಲಿಕೆ - 782

ಮೌನೇಶ್ವರರ ವಚನಗಳು - 782

" ಸೆಟ್ಟಿ ಪಟ್ಟಣವ ಸುಟ್ಟಂಥ ಕಾರಣದಿಂದ 
ನಷ್ಟವಾಯಿತು ಕಾಣಾ ನರರಿಗೆ ಪ್ರಭುರಾಯ
ಬಿಟ್ಟೆನೆಂಬಂಥ ಬಿರುದಿಲ್ಲ
ಪಾಪದ ಕೆಟ್ಟ ಕೋಪವ ಸುಡಬೇಕಲ್ಲದೆ 
ಪಟ್ಟದ ಗುದ್ದೆಯ ಸುಡಬಹುದೆ 
ಸುಟ್ಟಂತ ಕಾರಣದಿಂದ ಪಟ್ಟಕ್ಕೆ ಬಂತು ಪ್ರಳಯವು 
ಶಿವಶರಣರ ವಿದ್ಯೆ ಕಟ್ಟಿಕೊಳ್ಳಿ ಆ ನಿಮ್ಮ ಶರಗಿಲಿ 
ಇದು ನಿಮ್ಮ ತೊಟ್ಟಿಲ ಶಿಶುವಿನ ಹರಕೆಯಲಿ 
ಸಂತೋಷವು ಮುಟ್ಟಿತು ಮೂರು ಜಗಕೆಲ್ಲ, ಬಸವಣ್ಣ "


ವಚನಾರ್ಥ :-
ಶೆಟ್ಟಿ ಪಟ್ಟಣದ ಮುಖ್ಯಸ್ಥ. ಅಂತಹ ಶೆಟ್ಟಿ ಪಟ್ಟಣವ ಸುಟ್ಟ ಕಾರಣದಿಂದ ಎಲ್ಲವೂ ನಾಶವಾಯಿತು. ಕೋಪ ಎನ್ನುವುದು ಬೆಂಕಿಗಿಂತ ಅಪಾಯಕಾರಿ ಅಂತಹ ಸಿಟ್ಟನ್ನು ಸುಡಬೇಕಲ್ಲದೆ ಪಟ್ಟಗದ್ದೆಯ ಸುಡಬಾರದು. ಸುಟ್ಟ ಕಾರಣದಿಂದ ಪಟ್ಟಕ್ಕೆ ಪ್ರಳಯಬಂತು. ಕಾರಣ ಶಿವಶರಣರ ಅನುಭಾವದ ಪಥವನ್ನು ಹಿಡಿದು ಸಾತ್ವಿಕರಾಗಿರಿ. ಇದು ಸಣ್ಣವನಾದ ನಿಮ್ಮ ಶಿಶುವಿನ ಹರಕೆ ಎಂದು ಮೂಜಗವು ಸಂತೋಷದಿಂದ ಸ್ವೀಕರಿಸುವಂತಾಗಲಿ ಎಂದು ಪ್ರಶ್ನಿಸುತ್ತಾರೆ.

Post a Comment

0 Comments