ಶ್ರೀ ಮೌನೇಶ್ವರ ವಚನ ಮಾಲಿಕೆ - 783

ಮೌನೇಶ್ವರರ ವಚನಗಳು - 783

" ಸರ್ವೇಶ್ವರನೆನುತಲಿ ಹರಿದು ಗುಡ್ಡವನೇರಿ 
ಕರದನು ಕೈಲಾಸದ ಮಳೆಗಳನು 
ಬಸವಯ್ಯ  ಕುರುಹು ತೋರಿದನು ಸರ್ವರಿಗೆ 
ಅಲ್ಲಮಪ್ರಭುವಿನ ಬಿರುದಿನ 
ಡಂಕೆಯ ಹೊಯಿಸುತಲಿ, ಬಸವಣ್ಣ "

ವಚನಾರ್ಥ :-
ಮಳೆ ಬಾರದಾಗಿ ಸೃಷ್ಟಿ ಕಂಗಾಲಾಗಿದ್ದ ಹೊತ್ತಿನಲ್ಲಿ ಸರ್ವೇಶ್ವರನಾದ ಶಿವನನ್ನು ಸ್ಮರಿಸುತ್ತ ಗುಡ್ಡವನೇರಿ ಕರೆದಾಗ ಕೈಲಾಸದಿಂದ ಮಳೆ ತರಿಸಿ ಕುರುಹು ತೋರಿ ಸರ್ವರಿಗೆ ಎಚ್ಚರಿಕೆ ಗಂಟೆಯಾಗಿ ಬಿರುದಿನ ಡಂಕೆಯನ್ನು ಬಾರಿಸಿದರು ಮೌನೇಶ್ವರರು.

Post a Comment

0 Comments