ಶ್ರೀ ಮೌನೇಶ್ವರ ವಚನ ಮಾಲಿಕೆ - 781

ಮೌನೇಶ್ವರರ ವಚನಗಳು - 781

" ಸೂಳೆಯ ಮಕ್ಕಳಿಗೆ ತಾಯಿವುಂಟು ತಂದಿಲ್ಲ 
ಅನ್ಯಾಯವುಂಟು ನಿಜವಿಲ್ಲ ಇವರಿಗೆ 
ರಾಯಪಟ್ಟ ಸಲ್ಲುವದೆ ಕೇಳಿದವರು ಛೀಯನರೆ, ಬಸವಣ್ಣ "

ವಚನಾರ್ಥ :-
ಸದ್ಗುಣ ಸಂಪನ್ನನೂ, ಪ್ರಜ್ಞಾವಂತನೂ ಮಹತ್ವಾಕಾಂಕ್ಷಿಯೂ ಆದ ಅರಸ ಪ್ರಜೆಗಳನ್ನು ಕಾಳಜಿಯಿಂದ ನೋಡಿಕೊಳ್ಳಬಲ್ಲ. ಆದರೆ ಮೈಮಾರಿಕೊಂಡು ಬದುಕುವ ಸೂಳೆಯರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿಗೆ ತಾಯುಂಟು ಆದರೆ ತಂದಿಲ್ಲ. ಅಂಥವರಿಗೆ ಅನ್ಯಾಯವಾಗಿರಬಹುದು. ಆದರೆ ಅಂತಹ ಮಕ್ಕಳಿಗೆ ಅರಸನ ಪಟ್ಟ ಕಟ್ಟಿದರೆ ಅವಿವೇಕತನದಿಂದ ಪಟ್ಟಣವನ್ನೇ ಹಾಳು ಮಾಡ್ಯಾರು. ಇದನ್ನು ಕೇಳಿದವರು ಛೀ ಎನ್ನದೇ ಇರಲಾರರು. ಅನೈತಿಕ ಅರಸುಗಾರಿಕೆ ಅಧಃಪತನಕ್ಕೆ ದಾರಿ ಎಂಬುದು ಇಲ್ಲಿನ ಅರ್ಥ.

Post a Comment

0 Comments