ಶ್ರೀ ಮೌನೇಶ್ವರ ವಚನ ಮಾಲಿಕೆ - 785

ಮೌನೇಶ್ವರರ ವಚನಗಳು - 785

" ಹಿರಿಯರ ಮಕ್ಕಳಿಗೆ ಬಿರು ನುಡಿಯು ಸಲ್ಲದು 
ಬರನುಣ್ಣ ಅನುಗಾಲ ಲೋಕದ ಕುರಿಯ 
ಕಾಯ್ವಂಥಾ  ಶುನಕನ ಮಾಡಿದನು 
ಸೆರಿ ಅಂಬಲಿಯನಿಟ್ಟು ಸಲಹಿದನು 
ಧರ್ಮದ ಸಂಗಯ್ಯನ ಹರಿಕುಂಟು ಮೀರಿದರೆ 
ಇರವಿಯ ಮರಕೆ ಎಳಸುವರು, ಬಸವಣ್ಣ "

ವಚನಾರ್ಥ :-
ಪ್ರಾಜ್ಞರಾದ ಗುರುಹಿರಿಯರ ಮಕ್ಕಳಿಗೆ ಸಂಸ್ಕಾರ ಬಲದಿಂದ ಕಿರಿಯ ವಯಸ್ಸಿನಿಂದಲೇ ತಿಳುವಳಿಕೆ ಬಂದಿರುತ್ತದೆ. ಅಂತವರು ಇನ್ನೊಬ್ಬರ ಮನಸ್ಸು ನೋಯುವಂತಹ ಸಲ್ಲದ ಮಾತುಗಳನ್ನು ಆಡಬಾರದು. ಆಡಿದರೆ ಧರ್ಮದ ಸಂಗಯ್ಯ ಬಂದು ಕುರಿಗಾರರ ನಾಯಿಯ ಮಾಡಿ ಅಂಬಲಿ ಇಟ್ಟು ಸಲಹುವನು, ತಪ್ಪಿದರೆ ನರಕಕ್ಕೆ ಎಳಸುವನು.

Post a Comment

0 Comments