![]() |
ಮೌನೇಶ್ವರರ ವಚನಗಳು - 785 |
" ಹಿರಿಯರ ಮಕ್ಕಳಿಗೆ ಬಿರು ನುಡಿಯು ಸಲ್ಲದು
ಬರನುಣ್ಣ ಅನುಗಾಲ ಲೋಕದ ಕುರಿಯ
ಕಾಯ್ವಂಥಾ ಶುನಕನ ಮಾಡಿದನು
ಸೆರಿ ಅಂಬಲಿಯನಿಟ್ಟು ಸಲಹಿದನು
ಧರ್ಮದ ಸಂಗಯ್ಯನ ಹರಿಕುಂಟು ಮೀರಿದರೆ
ಇರವಿಯ ಮರಕೆ ಎಳಸುವರು, ಬಸವಣ್ಣ "
ವಚನಾರ್ಥ :-
ಪ್ರಾಜ್ಞರಾದ ಗುರುಹಿರಿಯರ ಮಕ್ಕಳಿಗೆ ಸಂಸ್ಕಾರ ಬಲದಿಂದ ಕಿರಿಯ ವಯಸ್ಸಿನಿಂದಲೇ ತಿಳುವಳಿಕೆ ಬಂದಿರುತ್ತದೆ. ಅಂತವರು ಇನ್ನೊಬ್ಬರ ಮನಸ್ಸು ನೋಯುವಂತಹ ಸಲ್ಲದ ಮಾತುಗಳನ್ನು ಆಡಬಾರದು. ಆಡಿದರೆ ಧರ್ಮದ ಸಂಗಯ್ಯ ಬಂದು ಕುರಿಗಾರರ ನಾಯಿಯ ಮಾಡಿ ಅಂಬಲಿ ಇಟ್ಟು ಸಲಹುವನು, ತಪ್ಪಿದರೆ ನರಕಕ್ಕೆ ಎಳಸುವನು.
0 Comments