![]() |
ಮೌನೇಶ್ವರರ ವಚನಗಳು - 786 |
" ಹೇಲನು ತೊಳೆವಂಥ ಜಾಲಗಾರನು ನಾನು
ಜಾಲಿಸಿ ನೋಡುವ ಸಂಗಯ್ಯನೆಂಬ ಅಭವನ್ನು
ಬೆದಕೆಂದ ನಾಗಲಿಯ ಮಗನು, ಬಸವಣ್ಣ "
ವಚನಾರ್ಥ :-
ಇದೊಂದು ಆಧ್ಯಾತ್ಮಿಕ ಅನುಭಾವದ ವಚನವಾಗಿದೆ. ಹೇಲು ತೊಳೆಯುವ ಜಾಲಗಾರನು ನಾನು ಎನ್ನುವಲ್ಲಿ ಈ ದೇಹಕ್ಕಂಟಿದ ಅಣವಮಲ, ಕಾರ್ಮಿಕ ಮಲ, ಮಾಯಾ ಮಲಗಳೆಂಬ ಮಲತ್ರಯಗಳನ್ನು ತೊಳೆಯುವ ಜಾಲಗಾರ. ಅಂದರೆ ಕಸದಲ್ಲಿ ರಸ ತೆಗೆಯುವವ, ಅಶುದ್ಧ ಲೋಹಗಳನ್ನು ಶುದ್ಧಿಸಿ ಆಭರಣ ವಾಗಿಸುವ ಕಲೆಗಾರ ಅಕ್ಕಸಾಲಿಗನು ಮೌನೇಶ್ವರರು. ಜಾಲಿಸಿ ನೋಡುವ ಜಾಲಗಾರನೆಂದರೆ ಅಕ್ಕಸಾಲಿಗ, ಕಸದಿಂದ ಚಿನ್ನವನ್ನು ಬೇರ್ಪಡಿಸುವ ಕುಶಲಕರ್ಮಿ, ಅಂಥವನ ನಿಜರೂಪ ಶೋಧಿಸುವ ಶೋಧಕ ಮನುಷ್ಯನಾಗಬೇಕೆಂದು ಅಕ್ಕನಾಗಲಿಯ ಮಗ ಚೆನ್ನಬಸವನ ಅವತಾರಿ ಮೌನೇಶ್ವರರು ಹೇಳುತ್ತಾರೆ.
0 Comments