ಶ್ರೀ ಮೌನೇಶ್ವರ ವಚನ ಮಾಲಿಕೆ - 787

ಮೌನೇಶ್ವರರ ವಚನಗಳು - 787


 " ಗದ್ಯ ವಚನ "
"ಲಕ್ಷ್ಮೇಶ್ವರದಲ್ಲಿ ಸಜ್ಜನಯ್ಯನು ಒಬ್ಬ ಕುಲದವಗೆ ಪ್ರಾಯಶ್ಚಿತ್ತವ ಮಾಡಲಿಕ್ಕೆ ಐಯ್ಯನ ಕೇಳಲಿಕ್ಕೆ, ಆವ ತೀರ್ಥಕ್ಕೆ ಹೋಗಬೇಕೆಂದು ನುಡಿದರೆ, ಅಗಸ್ತ್ಯ ತೀರ್ಥಕೆ ಹೋಗಬೇಡಿರಿ, ಅಮೃತ ತೀರ್ಥಕ್ಕೆ ಹೋಗೆಂದ. ಅಯ್ಯನ ಮಾತು ಮೀರಿ ಹೋದರು. ಅಲ್ಲಿಗೆ ಇಬ್ಬರು ವೇದ ಪಾಠಕರು ಬಂದು ದಾವ ಮುಖದಲ್ಲಿ ಪ್ರಾಯಶ್ಚಿತವ ಮಾಡುತ್ತಿದ್ದಿ ಎಂದು ಕೇಳಿದರೆ ಅವನು ಆನುದಪ್ಪಿದುದಕ್ಕೆ ಮಾಡುತ್ತೀನಿ ಎಂದರೇನು ನಿಮಗೆ ಪ್ರಾಯಶ್ಚಿತ್ತ ಸಲ್ಲುವದೆ ಕರ್ಮಹರನಿಂದವೆಂದು ನುಡಿದರು. ಆಗ ಸಜ್ಜನಯ್ಯನು ಬೆದರಿ ಅಲ್ಲಿ ಒಬ್ಬ ಕುಲದ ಅಯ್ಯನ ಹಂತ್ಯಕ್ಕೆ ಹೋಗಿ ಅಯ್ಯನ ಗುರುವಿನ ಮುಖ ಇಳಂಬವಾಯಿತು. ಆಗಲೇ ಹೇಳಿದನು ಮಣ್ಣು ಎತ್ತು ಆದರು ತನ್ನ ಎತ್ತು ಗೆಲಿಸಬೇಕೆಂದು ಆಡಿದರೆ ಬಂದ ಮನುಷ್ಯನ ಸಂಗಡ ನಡೆಗೊಂಡು ಬರುವಾಗ ಆವಾಗ ಒಂದು ಬಡಿಗೆ ಸಿಕ್ಕಿದರೆ ಹಿಡಿದುಕೊಂಡು ಹಿಂಡಾಡು ಕಾಯಲಿಕ್ಕೆ ಒಂದೇ ಟೊಣ್ಣೆ. ಆ ಅಯ್ಯನು ಬಂದು ಸಜ್ಜನಯ್ಯನ ಬೆದರಿಸಿ ಏನನ್ನ ಬೇಡಿರಿ ಬಂದರೆ ರುವ್ವಿ ದುಗ್ಗಾಣಿ ಕೊಟ್ಟು ಕಳಿಸಬೇಕು, ನೀನು ಗೋತ್ರವ ಕೇಳಲಿಕ್ಕೆ ಹೆಣ್ಣು ಗಂಡು ಕೊಡು ತಿದಿಯಾ ಎಂದರೆ ಆಗ ನಿಂತುಮಾತಾಡಿದನು. ಜ್ಞಾನ ಗುರುವೊ ಅಜ್ಞಾನ ಗುರುವೊ ಎಂದು ನುಡಿದರು. ಜಾತ ಜಾತಕೆಲ್ಲ ಪೋತರಾಜನೆ ಗುರುವು ಮಾತಂಗಿಯ ಮಗನಾದವನು ಪರಬ್ರಹ್ಮನ ಗೋತ್ರವ ಕೇಳುವವನ ಹೆಸರೇನು? ಆವಿನ ಮೂತ್ರವ ಕುಡಿವವನ ಕುಲವೇನು? ನಿನ್ನ ಮುಖ ಕಂಡರೆ ಅಪಶಕುನ, ಪೇತು ನಿನಗೆ ಇಷ್ಟು ಮಾತು ನಿನಗ್ಯಾತಕ್ಕೆ ನನ್ನ ಕುಲ ಆವಿನಕುಲ ನಿನ್ನ ಕುಲ ವಿಪ್ರಕುಲವೇನು? ಅವು ಹೇಲನು ತಿಂಬುತ್ತದೆ ಎಂದರೆ ಆವು ಹೇಲನೆ ತಿಂದು ಹಾಲನ್ನ ಕೊಡುವುದು. ವಾಯಿಯಿಲ್ಲದೆ ಕೂಡಿ ವಸ್ತು ಬೆರೆದಂತೆ ನಾಯತ್ತ ನರನೆತ್ತ ನಿಮ್ಮ ಹಳಿದರೆ ಪಾಪ ಹತ್ತಿತು ಈತನ್ನ ನಂಬಬೇಕು ಸಜ್ಜನಯ್ಯ"

ವಚನಾರ್ಥ :-
ಓದುಗ ಹವ್ಯಾಸಿಗರೆ, ಜಗದ್ಗುರು ಶ್ರೀ ಮೌನೇಶ್ವರರು ಎಂಥಹ ಮಹಾನ್ ವಚನಕಾರರೆಂದರೆ, ಅವರು ಬರೆದ ಕೆಲವು ವಚನಗಳು ಅರ್ಥೈಸಲಾಗದಷ್ಟು ಕ್ಲೀಷ್ಟಕರವಾಗಿವೆ. ಹಾಗೂ ಅವರು ಬರೆದಿರುವ ಹಲವಾರು ಗದ್ಯಾತ್ಮಕ ವಚನಗಳ ಸಾಲಿನಲ್ಲಿ ಈ ವಚನವೂ ಸಹ ಕಂಡು ಬರುತ್ತದೆ. ಪ್ರಸ್ತುತ ವಚನವು ಮೌನೇಶ್ವರರ ಕಾಲದಲ್ಲಿ ನಡೆದಂತ ಒಂದು ಪ್ರಸಂಗವೊಂದನ್ನು ಕಟ್ಟಿಕೊಡುತ್ತದೆ. ಜಗದ್ಗುರು ಮೌನೇಶ್ವರರು ಬರೆದಿರುವ ಹಲವಾರು ವಚನಗಳು ಈ ರೀತಿಯ ಕ್ಲೀಷ್ಟತೆಯನ್ನು ಹೊಂದಿವೆ.

Post a Comment

0 Comments