![]() |
| ಮೌನೇಶ್ವರರ ವಚನಗಳು - 510 |
" ಇಂದ್ರಿಯ ಸೂತಕವೊಂದೆ, ಕಂದನ ಜನಿತಗಳೊಂದೆ
ಮಂದೆಲ್ಲ ಒಂದೆ ಮರಣಗಳು ಇದರೊಳು ಕುಂದು ಕೊರತೆಗಳೆಂಬ ಪರಿಹ್ಯಾಗೆ ಎಂದಿನ್ನು ನಂದಿಕೇಶ್ವರನ ವರಪುತ್ರ ಬಂದಿನ್ನು
ಸಂದು ಹೇಳುವನು ಸಭೆ ಮೆಚ್ಚಿ, ಬಸವಣ್ಣ "
ವಚನಾರ್ಥ :-
ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಅವನು ಯಾವ ಕುಲದವನಾಗಿರಲಿ ಹುಟ್ಟು ಸಾವು ನೋವು ಬ್ಯಾನಿಗಳೊಂದೆ. ಅವನ ಸಾಮಾಜಿಕ ಸ್ಥಾನಮಾನವನ್ನು ನೋಡಿ ಸಾವು ನೋವುಗಳು ಬರುವುದಿಲ್ಲ. ಹೀಗಿರುವಾಗ ಮನುಷ್ಯರಲ್ಲಿ ಅನಗತ್ಯ ಭೇದವೇಕೆ, ವಿಂಗಡಣೆ ಏಕೆ. ಎಷ್ಟೋ ಸಾಧಕರು ಈ ಕುರಿತು ಜನರಿಗೆ ತಿಳಿಹೇಳುತ್ತ ಬಂದಿದ್ದರೂ ಮಾನವರಲ್ಲಿನ ಕಲ್ಪಿತ ಜಾತಿ ಹಾಗೂ ಕುಲದ ಅಸಮಾನತೆಗಳು ದೂರವಾಗಿಲ್ಲ ಇಂತಹ ಮೂಢರಿಗೆ ತಿಳಿಹೇಳಲು ನಂದಿಕೇಶ್ವರನ ವರಪುತ್ರ ಮೌನೇಶ್ವರರೇ ಅವತರಿಸಿ ಬರುವರು.
ಮನುಷ್ಯರಾಗಿ ಹುಟ್ಟಿ ಬಂದ ಮೇಲೆ ಅವನು ಯಾವ ಕುಲದವನಾಗಿರಲಿ ಹುಟ್ಟು ಸಾವು ನೋವು ಬ್ಯಾನಿಗಳೊಂದೆ. ಅವನ ಸಾಮಾಜಿಕ ಸ್ಥಾನಮಾನವನ್ನು ನೋಡಿ ಸಾವು ನೋವುಗಳು ಬರುವುದಿಲ್ಲ. ಹೀಗಿರುವಾಗ ಮನುಷ್ಯರಲ್ಲಿ ಅನಗತ್ಯ ಭೇದವೇಕೆ, ವಿಂಗಡಣೆ ಏಕೆ. ಎಷ್ಟೋ ಸಾಧಕರು ಈ ಕುರಿತು ಜನರಿಗೆ ತಿಳಿಹೇಳುತ್ತ ಬಂದಿದ್ದರೂ ಮಾನವರಲ್ಲಿನ ಕಲ್ಪಿತ ಜಾತಿ ಹಾಗೂ ಕುಲದ ಅಸಮಾನತೆಗಳು ದೂರವಾಗಿಲ್ಲ ಇಂತಹ ಮೂಢರಿಗೆ ತಿಳಿಹೇಳಲು ನಂದಿಕೇಶ್ವರನ ವರಪುತ್ರ ಮೌನೇಶ್ವರರೇ ಅವತರಿಸಿ ಬರುವರು.


0 Comments