ಮೌನೇಶ್ವರರ ಹುಷಾರ ವಚನಗಳು - ಐದು |
" ಪತ್ತಾರರಿಗೆ ಪಟ್ಟವಾಗುವುದೇ ಸಹಜ
ದಿಟ್ಟರಾದವರು ಗಟ್ಟ್ಯಾಗಿ ನೆಲೆಗೊಳ್ಳಿರಿ, ಬಿಟ್ಟರೆ ಕೆಟ್ಟು ಹೋದೀರಿ ನೀವು ಸೃಷ್ಟಿಗೆ ಕಾರಣಕರ್ತರು ಹೌದೆಂದು
ಗಟ್ಟ್ಯಾಗಿ ನಂಬಿರೋ ಭಕ್ತರಾದವರು ಬಹು ಹುಷಾರ "
ವಚನಾರ್ಥ :-
ಪತ್ತಾರರಿಗೆ(ವಿಶ್ವಕರ್ಮರಿಗೆ) ಪಟ್ಟವಾಗುವುದು ಸಹಜ ಎನ್ನುವಲ್ಲಿ ಬಂಗಾರವು ತುಟ್ಟಿಯಾಗಿ ಅಕ್ಕಸಾಲಿಗರಿಗೆ ಹೆಚ್ಚಿನ ಉದ್ಯೋಗಗಳು ಸೃಷ್ಟಿಯಾಗಿ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಕೆಲಸ ಮಾಡುವವರಿಗಾಗಿ ಹುಡುಕಬೇಕಾಗುತ್ತದೆನ್ನುವ ಅರ್ಥ ಒಂದಾದರೆ, ಈ ವಚನ ವಿಶ್ವಕರ್ಮರನ್ನೇ ನೇರವಾಗಿ ಸಂಬೋಧಿಸಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಪತ್ತಾರರಿಗೆ ಪಟ್ಟವಾಗುವುದು ಎಂದರೆ ಹಿಂದೂ ಧರ್ಮದ ಗುರುಪಟ್ಟ ಎಂದೂ ತಿಳಿಯಬೇಕು. ರಾಜಕೀಯ ಪಟ್ಟವಲ್ಲ, ಆ ಸ್ಥಾನಕ್ಕೆ ಬೇಕಾದ ಭಕ್ತಿಯನ್ನು ಧೀರತ್ವವನ್ನು, ದೃಢತೆಯನ್ನು ಅವರು ಪಡೆಯಬೇಕು. ಆಲಸ್ಯ, ತಾತ್ಸಾರ ಮಾಡಿದರೆ ಕೆಟ್ಟು ಹೋಗುವಿರಿ ಎಂದೂ ಸಹ ಎಚ್ಚರಿಸಿದ್ದಾರೆ ಮೌನೇಶ್ವರರು. 'ನೀವು(ವಿಶ್ವಕರ್ಮರು) ಸೃಷ್ಟಿಗೆ ಕಾರಣ ಕರ್ತರು' ಎಂಬುದಕ್ಕೆ ವೇದಗಳ ಕಾಲದಿಂದಲೂ ಆಧಾರಗಳಿವೆ. ಇದನ್ನು ಗಟ್ಟಿಯಾಗಿ ನಂಬಿ ಎಂದು ಎಚ್ಚರಿಸುತ್ತಾರೆ ಮೌನೇಶ್ವರರು.
0 Comments